ಸಂಸ್ಥೆಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ಪುರಸ್ಕಾರವನ್ನು ಪ್ರತೀ ವರ್ಷದ ಕನ್ನಡ ವಿಜ್ಞಾನ ಸಮ್ಮೇಳನದ ಸಂದರ್ಭದಲ್ಲಿ ಸೆಪ್ಟೆಂಬರ್ ೧೫ ನೇ ತಾರೀಖಿನಂದು ಪ್ರಬುದ್ಧ ಹಾಗೂ ಶ್ರೇಷ್ಠ ವಿಜ್ಞಾನಿಯೋರ್ವರಿಗೆ ನೀಡಿ ಗೌರವಿಸಲಾಗುತ್ತದೆ. ಪುರಸ್ಕೃತರು ಸಾಂಪ್ರದಾಯಿಕ ಅಥವಾ ನೂತನ ವಿಜ್ಞಾನದ ಯಾವುದೇ ವಿಷಯವರ್ಗದಿಂದಲೂ ಬಂದಿರಬಹುದು. ಈ ವರೆಗಿನ ನಮ್ಮ ಪುರಸ್ಕೃತರನ್ನು ತಿಳಿಯಲು ಕನ್ನಡ ವಿಜ್ಞಾನ ಸಮ್ಮೇಳನದ ಪುಟವನ್ನು ನೋಡಿ.